Skip to main content

ಬಿಲ್ವ ಪತ್ರೆ (BILLBOARD)

ಬಿಲ್ವ ಪತ್ರೆ

ಮೂಲವ್ಯಾಧಿ, ಕ್ಷ ಯ ರೋಗ,ಗ್ಯಾಸ್ಟ್ರಿಕ್‌ ಅನೇಕ ರೋಗಗಳಿಗೆ ರಾಮಬಾಣ ಈ ಬಿಲ್ವ ಪತ್ರೆ ಯಾವ ರೀತಿಯಾಗಿ ಬಳಸಬೇಕು ಗೊತ್ತಾ..!

ಬಿಲ್ವದ ಎಲೆಗಳ ರಸವನ್ನು ಖಾಲಿ ಹೊಟ್ಟೆಗೆ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ. ಹೊಟ್ಟೆ ಹುಳು, ಹೊಟ್ಟೆ ನೋವು , ವಾಕರಿಕೆ ಇದ್ದಲ್ಲಿ 3 ಚಮಚ ಬಿಲ್ವದ ಎಲೆಯ ರಸಕ್ಕೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು ಇದರಿಂದ ಈ ಎಲ್ಲ ರೋಗಗಳು ವಾಸಿಯಾಗುತ್ತವೆ.

ಬಿಲ್ವದ ಎಲೆಗಳನ್ನು ನುಣ್ಣಗೆ ರುಬ್ಬಿ ಕಣ್ಣಿನ ಮೇಲೆ ಲೇಪನ ಮಾಡಿದರೆ ಕಣ್ಣು ನೋವು, ಉರಿ ಕಡಿಮೆಯಾಗುತ್ತದೆ. ನೀವು ಈ ರೀತಿಯಾಗಿ ಹಾಗಾಗ ಮಾಡಿದರೆ ಉ ಸಮಸ್ಯೆಗಳು ಬಹುಬೇಗನೆ ಪರಿಹಾರವಾಗುತ್ತವೆ.

ಪ್ರಥಮ ಹಂತದ ಕ್ಷ ಯ ರೋಗ ಇದ್ದಲ್ಲಿ ಬಿಲ್ವದ ಹಣ್ಣಿನ ಜೊತೆ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿ ಸೇವಿಸಿದರೆ ರೋಗ ಗುಣವಾಗುತ್ತದೆ. ಒಂದು ಚಮಚ ಬಿಲ್ವದ ಕಾಯಿಯ ಪುಡಿಯನ್ನು ಒಣಶುಂಠಿ ಮತ್ತು ಜೀರಿಗೆ ಪುಡಿ ಸೇರಿಸಿ ನೀರಿನಲ್ಲಿ ನೆನೆಸಿ ನಂತರ ಸೋಸಿ ಆ ನೀರನ್ನು ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ .

ಸುಮಾರು 10 ಗ್ರಾಂ ಬಿಲ್ವದ ಲೇಹ ಸೇವಿಸುವುದರಿಂದ ಗ್ಯಾಸ್ಟ್ರಿಕ್‌ ತೊಂದರೆ ನಿವಾರಣೆಯಾಗುತ್ತದೆ.ಐದು ಚಮಚ ಬಿಲ್ವದ ಕಷಾಯ ಕುಡಿದರೆ ಜ್ವರ, ಗಂಟಲು ನೋವು ನಿವಾರಣೆಯಾಗುತ್ತದೆ.10 ಗ್ರಾಂ ಬಿಲ್ವದ ಚೂರ್ಣ ಸೇವಿಸಿದರೆ ಭೇದಿ ಮತ್ತು ಹೊಟ್ಟೆ ನೋವು ಶಮನವಾಗುತ್ತದೆ.

ಬೇವಿನ ಮರದ ಚಕ್ಕೆ ಮತ್ತು ಬಿಲ್ವದ ಮರದ ಚಕ್ಕೆ ಎರಡೂ ಸಮಪ್ರಮಾಣದಲ್ಲಿ ಜಜ್ಜಿ ನೀರಿಗೆ ಹಾಕಿ ಕಷಾಯ ಮಾಡಿ ಹಾಲಿನ ಜೊತೆ ಕುಡಿದರೆ ಪಿತ್ತ, ಹುಳಿತೇಗು, ಹೊಟ್ಟೆನೋವು, ಹೊಟ್ಟೆ ಉಬ್ಬರ ಇವೆಲ್ಲವೂ ಕಡಿಮೆಯಾಗುತ್ತವೆ.

ಬಿಲ್ವಕ್ಕೆ ಸಂಸ್ಕೃತದಲ್ಲಿರುವ ಹೆಸರುಗಳು ಅದರ ಗುಣಲಕ್ಷಣ ಮತ್ತು ಉಪಯೋಗಗಳನ್ನು ಸೂಚಿಸುತ್ತವೆ.
ವಿಲ್ವಸ್ತು ಪೂತಿಪಾತಃ ಶಾಂಡಿಲ್ಯ ಶ್ರೀಫಲಶ್ಚ ಮಾಣೂರಃಮುಷ್ಟಿ ಫಲಶ್ಚಃ ಶಲಾಟಃ ಶೈಲೂಶಃ ಕರ್ಕಟಃ ಶ್ರೀಯಾಹ್ವಶ್ಚ
ಸದಾಫಲ ಪೀಲುಫಲೋ ಹೃದಯಗಂಧ ಹೃದ್ಯಗಂಧ ಶಲಾಟಿಕಃ
ಶಲಾಟುದ್ರುಮ ಇತ್ಯುಕ್ತೋ ಶಬ್ದೈ ಪರ್ಯಾಯವಾಚಕೈ
- ಅಭಿದಾನ ಮಂಜರೀಬಿಲ್ವ - ಸರ್ವರೋಗನಿವಾರಕ ಶಾಂಡಿಲ್ಯ - ಎಲ್ಲ ಬಗೆಯ ನೋವನ್ನು ನಿವಾರಿಸುವಂಥದ್ದು. ಶೈಲೂಷ - ಪರ್ವತಗಳ ಮೇಲೆ ಬೆಳೆಯುವಂಥದ್ದು ಶ್ರೀಫಲ - ಸುಂದರ ಹಣ್ಣುಗಳನ್ನು ಕೊಡುವಂಥದ್ದು
ಆಯುರ್ವೇದದ ಪ್ರಕಾರ ಬಿಲ್ವದ ಗುಣಧರ್ಮಗಳು ಹೀಗಿವೆ : ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ. ಬಿಲ್ವದ ಹಸಿಕಾಯಿ ಕಫ ಮತ್ತು ವಾತನಿವಾರಕವಾಗಿದೆ. ಹಸಿವನ್ನು ಹೆಚ್ಚಿಸುತ್ತದೆ, ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ, ಹೊಟ್ಟೆ ನೋವು ಮತ್ತು ಭೇದಿಗೆ ಚಿಕಿತ್ಸೆ ಮಾಡಲು ನೆರವಾಗುತ್ತದೆ. ಪಕ್ವವಾದ ಬಿಲ್ವದ ಹಣ್ಣು ವಾತಪಿತ್ತವನ್ನು ಹೆಚ್ಚಿಸುತ್ತದೆ. ಕಫವನ್ನು ಕಡಿಮೆ ಮಾಡುತ್ತದೆ. ಇದನ್ನು ಜೀರ್ಣ ಮಾಡಿಕೊಳ್ಳುವುದು ಕಷ್ಟ. ಬಿಲ್ವದ ಎಲೆ ವಾತ ಮತ್ತು ಕಫ ತೊರೆದು ಹಾಕುತ್ತದೆ. ಅಜೀರ್ಣ ಮತ್ತು ಹೊಟ್ಟೆನೋವಿಗಾಗಿ ಮದ್ದಾಗಿ ಬಳಕೆಯಾಗುತ್ತಿದೆ. ತಿರುಳಿನಿಂದ ತೆಗೆದ ತೈಲವು ವಾತನಿವಾರಕವಾಗಿದೆ.
ಚರ್ಮದ ಸಮಸ್ಯೆಗಳು : ದೇಹದ ಚರ್ಮದ ದುರ್ಗಂಧವನ್ನು ನಿವಾರಿಸಲು ತಾಜಾ ಬಿಲ್ವಪತ್ರೆ ರಸವನ್ನು ಪ್ರತಿದಿನ ಮೈಗೆ ಚೆನ್ನಾಗಿ ಲೇಪಿಸಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡಬೇಕು. ದೇಹದ ಮೇಲೆ ಕುರುಗಳು ಇದ್ದಾಗ ಬಿಲ್ವ ವೃಕ್ಷದ ಬೇರನ್ನು ನಿಂಬೆರಸದಲ್ಲಿ ತೇಯ್ದು ಲೇಪಿಸುತ್ತಿರಬೇಕು..
ತಲೆನೋವು : ತಲೆನೋವು ಸಮಸ್ಯೆ ಇದ್ದಾಗ ಬಿಲ್ವದ ಮರದ ಒಣಬೇರನ್ನು ಅರೆದು ಹಣೆಗೆ ಲೇಪಿಸಬೇಕು.
ತಲೆಕೂದಲಿನ ಸಮಸ್ಯೆಗಳು : ಬಿಲ್ವಪತ್ರೆ ಕಾಯಿಯನ್ನು ಬೇಯಿಸಿ ನಂತರ ಅದರ ತಿರುಳನ್ನು ತೆಗೆದು ನುಣ್ಣಗೆ ಅರೆದು ತಲೆಗೆ ಲೇಪಿಸಿಕೊಡು ಅರ್ಧ ಗಂಟೆಯ ನಂತರ ತೊಳೆಯಬೇಕು. ಇದನ್ನು ದಿನಕ್ಕೊಮ್ಮೆಯಂತೆ ಹದಿನೈದು ದಿನಗಳ ಕಾಲ ಮಾಡುವುದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ತಲೆ ಸ್ನಾನವನ್ನು ಮಾಡುವ ಅರ್ಧಗಂಟೆಯ ಮೊದಲು ಬಿಲ್ವಪತ್ರೆಯನ್ನು ಅರೆದು ತಲೆಗೆ ಲೇಪಿಸಿಕೊಳ್ಳಬೇಕು. ಇದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ. ಅಕಾಲ ನರೆಕೂದಲು ಸಮಸ್ಯೆ ನಿವಾರಣೆಯಾಗುತ್ತದೆ.
ಮಾನಸಿಕ ಸಮಸ್ಯೆಗಳು : ನಿದ್ರಾಹೀನತೆಯಿಂದ ಬಳಲುತ್ತಿರುವವರು ಬಿಲ್ವದ ಎಲೆಯನ್ನು ನೀರು ಸೇರಿಸದೆ ಅರೆದು ಹಣೆಗೆ ಲೇಪಿಸಿಕೊಳ್ಳಬೇಕು. ಇದರಿಂದ ಒಳ್ಳೆಯ ನಿದ್ದೆ ಬರುತ್ತದೆ. ನಿಶ್ಯಕ್ತಿ : ಬಿಲ್ವಪತ್ರೆಯ ರಸವನ್ನು ಪ್ರತಿದಿನ ೨ - ೩ ಚಮಚೆಯ ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.ನಿಶ್ಯಕ್ತಿ , ಆಯಾಸದಿಂದ ಬಳಲುತ್ತಿರುವವರು ದಿನದಲ್ಲಿ ಮೂರು ಬಾರಿ ದಶಮೂಲಾರಿಷ್ಟವನ್ನು ಎರಡೆರಡು ಚಮಚೆಯಂತೆ ಸೇವಿಸಬೇಕು.
ಕಣ್ಣಿನ ಸಮಸ್ಯೆಗಳು : ಕಣ್ಣಿನಲ್ಲಿ ಉರಿ , ತುರಿಕೆ ಇದ್ದಾಗ ಬಿಲ್ವಪತ್ರೆಯನ್ನು ನುಣ್ಣಗೆ ಅರೆದು ಕಣ್ಣಿನ ಮೇಲೆ ಲೇಪಿಸಿಕೊಳ್ಳಬೇಕು. ಕಣ್ಣಿನ ಸೋಂಕು ಇದ್ದಾಗ ಅಥವಾ ಕಣ್ಣು ಕೆಂಪಾದಾಗ ಮಾಡಬಹುದಾದ ಚಿಕಿತ್ಸೆ ಇದು - ಒಂದು ಹಿಡಿಯ ಬಿಲ್ವದ ಎಳೆಯ ಎಲೆಗಳನ್ನು ಸಂಗ್ರಹಿಸಿ ಮಣ್ಣಿನ ಕುಡಿಕೆಗೆ ಹಾಕಿ ಹುರಿಯಬೇಕು. ಅದು ಸ್ವಲ್ಪ ಬಿಸಿ ಇರುವಾಗಲೇ ಒಂದು ಬಟ್ಟೆಯಲ್ಲಿ ಹಾಕಿ ಕಣ್ಣಿನ ಮೇಲಿಡಬೇಕು. ಸ್ವಲ್ಪ ನೀರಿನಲ್ಲಿ ಬಿಲ್ವದ ಹೂಗಳನ್ನು ನೆನೆಸಿಟ್ಟು ನಂತರ ಶೋಧಿಸಿ ಆ ನೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳುತ್ತಿದ್ದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ.
ಬಾಯಿಯ ಸಮಸ್ಯೆಗಳು : ಬಾಯಿಯಲ್ಲಿ ಹುಣ್ಣಾಗಿದ್ದಾಗ ಬಿಲ್ವಪತ್ರೆ ಹಣ್ಣಿನ ತಿರುಳಿಗೆ ಸ್ವಲ್ಪ ಬೆಲ್ಲ ಸೇರಿಸಿ ದಿನದಲ್ಲಿ ಒಂದು ಬಾರಿ ಸೇವಿಸಬೇಕು. ಅಜೀ ಸಮಸ್ಯೆಯಿಂದ ಅಥವಾ ಹೊಟ್ಟೆ ಹುಣ್ಣಿನ ಸಮಸ್ಯೆ ಯಿಂದ ವಾಂತಿ ಆಗುತ್ತಿದ್ದರೆ ಎರಡು ಚಮಚೆ ಬಿಲ್ವಪತ್ರೆ ರಸಕ್ಕೆ ಒಂದು ಚಮಚೆ ಜೇನುತುಪ್ಪ ಸೇರಿಸಿ ದಿನದಲ್ಲಿ ೨-೩ ಬಾರಿ ನೆಕ್ಕಬೇಕು. ಬಿಲ್ವ ಫಲದ ಚಿಪ್ಪನ್ನು ಅರೆದು ಜೀನುತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ ವಾಕರಿಕೆ ನಿಲ್ಲುತ್ತದೆ.
ಮೂಗಿನ ಸಮಸ್ಯೆಗಳು : ನೆಗಡಿ , ಇದ್ದಾಗ ಬಿಲ್ವಪತ್ರೆ ಎಲೆಯ ರಸವನ್ನು ಸ್ವಲ್ಪ ನೀರಿಗೆ ಬೆರೆಸಿ, ಈ ನೀರನ್ನು ಮೂಗಿಗೆ ಹನಿಸಬೇಕು.
ನೆಗಡಿ, ಕೆಮ್ಮು , ದಮ್ಮು , ಶ್ವಾಸಕೋಶದ ಸಮಸ್ಯೆಗಳು' : ಕ್ಷಯರೋಗದಿಂದ ಬಳಲುತ್ತಿರುವವರು ೪೦ ದಿನಗಳವರೆಗೆ ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೀನುತುಪ್ಪ ಸೇರಿಸಿ ತಿನ್ನಬೇಕು. ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದಕೂಡಲೇ ಒಂದು ಬಿಲ್ವದ ಎಲೆಯನ್ನು ೨-೩ ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ೩೦-೪೦ ದಿನಗಳ ಕಾಲ ಮಾಡಬೇಕು.
ಹೃದಯದ ಸಮಸ್ಯೆಗಳು : ಆಗಾಗ ಹೃದಯದ ಬಡಿತ ತಪ್ಪುವ ಪಾಲ್ಪಿಟೇಶನ್ ಸಮಸ್ಯೆ ಇರುವವರು ಬಿಲ್ವ ಮರದ ಬೇರಿನ ತೊಗಟೆಯ ಕಷಾಯವನ್ನು ಕುಡಿಯುತ್ತಿರಬೇಕು. ಬಿಲ್ವದ ಎಲೆಗಳನ್ನು ಚೆನ್ನಾಗಿ ಒಣಗಿಸಿ ಚೂರ್ಣ ಮಾಡಿ ಸಂಗ್ರಹಿಸಿಡಬೇಕು. ರಕ್ತದ ಅಧಿಕ ಒತ್ತಡ ಇರುವವರು ಅರ್ಧದಿಂದ ಒಂದು ಚಮಚೆಯ ಈ ಚೂರ್ಣವನ್ನು ಒಂದು ಬಟ್ಟಲು ನೀರಿಗೆ ಸೇರಿಸಿ ಕುದಿಸಿ, ತಣಿಸಿ ದಿನದಲ್ಲಿ ೨-೩ ಬಾರಿ ಕುಡಿಯುತ್ತ್ತಿದ್ದರೆ ಪ್ರಯೋಜನವಾಗುತ್ತದೆ.
ಹೊಟ್ಟೆಯ ಸಮಸ್ಯೆ ಗಳು: ಭೇದಿ ಮುಂತಾದ ಹೊಟ್ಟೆಯ ಸಂಬಂಧಿ ಸಮಸ್ಯೆಗಳಿದ್ದಾಗ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ಬಿಲ್ವದ ಹಣ್ಣನ್ನು ದಾಲ್ಚಿನ್ನಿ ಪುಡಿಯೊಂದಿಗೆ ಕಲೆಸಿ ಸೇವಿಸಬೇಕು. ಸಮಪ್ರಮಾಣದ ಬಿಲ್ವದ ತಿರುಳು ಮತ್ತು ಎಳ್ಳನ್ನು ಅರೆದು ಸ್ವಲ್ಪ ಬೆಣ್ಣೆ ಮತ್ತು ತುಪ್ಪದಲ್ಲಿ ಸೇರಿಸಿ ಸೇವಿಸುತ್ತಿದ್ದರೆ, ಭೇದಿ ಮುಂತಾದ ಮಲಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಭೇದಿ, ಅತಿಸಾರದಿಂದ ಬಳಲುತ್ತಿರುವವರು ಎರಡು ಚಮಚೆಯ ಬಿಲ್ವಪತ್ರೆ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ದಿನದಲ್ಲಿ ೩-೪ ಬಾರಿ ಸೇವಿಸಬೇಕು. ಬೇಲದ ಹಣ್ಣಿನ ತಿರುಳನ್ನು ಒಣಗಿಸಿ ಸ್ವಲ್ಪ ಸೋಂಪು ಕಾಳು ಸೇರಿಸಿ ಪುಡಿಮಾಡಿಟ್ಟು ಕೊಳ್ಳ ಬೇಕು. ರಕ್ತಭೇದಿ ಸಮಸ್ಯೆ ಇದ್ದಾಗ ಈ ಚೂರ್ಣವನ್ನು ಒಂದು ಚಮಚೆಯ ತೆಗೆದುಕೊಂಡು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು. ಊಟ ಸೇರದಿರುವುದು, ಹಸಿವೆ ಇಲ್ಲದಿರುವುದು - ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ನಾಲ್ಕೈದು ಬಿಲ್ವ ಪತ್ರೆ ಎಲೆಯನ್ನು ಪ್ರತಿದಿನ ಮುಂಜಾನೆ ಬೆಳಗ್ಗೆ ಚೆನ್ನಾಗಿ ಅಗಿದು ತಿನ್ನಬೇಕು. ಇದನ್ನು ಮೂರು ದಿನಗಳ ಕಾಲ ಮಾಡಬೇಕು.
ಬೊಜ್ಜ್ಜು : ಬೊಜ್ಜಿನ ಸಮಸ್ಯೆ ಇರುವವರು ಬಿಲ್ವ , ಅಗ್ನಿಮಂಥ, ಆನೆಮೊಗ್ಗು , ಶಿವನಿ ಮತ್ತು ಪದರಿ ಈ ಮರಗಳ ಬೇರಿನ ಕಯವನ್ನು ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯುತ್ತಿದ್ದರೆ ಸಮಸ್ಯೆಯ ನಿವಾರಣೆಯಾಗುತ್ತದೆ.
ಗಾಯ,ಹುಣ್ಣು : ದೇಹದ ಮೇಲೆ ಗಾಯವಾಗಿ ಅದು ಕೊಳೆಯುವ ಸ್ಥಿತಿ ತಲಪಿದಾಗ (ಗ್ಯಾಂಗ್ರೀನ್ ) ಆ ಜಾಗದಲ್ಲಿ ಬಿಲ್ವಪತ್ರೆಯನ್ನು ಅರೆದು ಪೌಲ್ಟೀಸು ಕಟ್ಟಿದರೆ ಬೇಗ ಗುಣವಾಗುತ್ತದೆ. ಸುಟ್ಟ ಗಾಯದ ಮೇಲೆ ಬಿಲ್ವಪತ್ರೆ ರಸವನ್ನು ಲೇಪಿಸುತ್ತಿದ್ದರೆ ಬೇಗ ಮಾಯುತ್ತದೆ.
ನೋವು, ಬಾವು, ಊತ : ಕಾಲು ಅಥವಾ ದೇಹದ ಬೇರಾವುದೇ ಭಾಗದಲ್ಲಿ ಊತ ಇದ್ದಾಗ ಬಿಲ್ವಪತ್ರೆ ರಸಕ್ಕೆ ಕಾಳುಮೆಣಸು ಪುಡಿ ಸೇರಿಸಿ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಮೈಕೈ ನೋವು ಸಮಸ್ಯೆ ಯಿಂದ ಬಳಲುತ್ತಿರುವವರು ಬಿಲ್ವಪತ್ರೆ ಎಲೆ, ಬೇವಿನ ಎಲೆ ಮತ್ತು ಹರಳು ಗಿಡದ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ ಆ ನೀರನ್ನು ಸ್ನಾನದ ನೀರಿಗೆ ಮಿಶ್ರ ಮಾಡಿ ಪ್ರತಿ ದಿನ ಸ್ನಾನ ಮಾಡಬೇಕು. ಬಿಲ್ವದ ತಿರುಳಿಗೆ ಸಾಸಿವೆ ಎಣ್ಣೆ ಸೇರಿಸಿ ಕಲೆಸಿ ಬಿಸಿ ಮಾಡಿ ಊತ, ಬಾವು ಇರುವಲ್ಲಿ ಇಟ್ಟರೆ ಪ್ರಯೋಜನವಾಗುತ್ತದೆ.
ಮಧುಮೇಹ : ಬಿಲ್ವಪತ್ರೆ, ಮಧುನಾಶನಿ, ಬೇವಿನಸೊಪ್ಪು , ನುಗ್ಗೆಸೊಪ್ಪುಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಬೇಕು. ಇದಕ್ಕೆ ಒಣಗಿಸಿದ ಹಾಗಲಕಾಯಿ ಚೂರ್ಣ ಮತ್ತು ಹುರಿದ ಮೆಂತ್ಯದ ಚೂರ್ಣವನ್ನು ಸಮಪ್ರಮಾಣದಲ್ಲಿ ಬೆರೆಸಿ ಇಡಬೇಕು. ಈ ಚೂರ್ಣವನ್ನು ಮಧುಮೇಹ ಸಮಸ್ಯೆ ಇರುವವರು ಒಂದು ಸಲಕ್ಕೆ ಮೂರು ಚಮಚೆಯಂತೆ ದಿನಕ್ಕೆ ಮೂರು ಬಾರಿ ನೀರಿನೊಂದಿಗೆ ಸೇವಿಸುತ್ತಿರಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಅಗಸೆ ಸೊಪ್ಪು , ಬಿಲ್ವ ಪತ್ರೆ ಸೊಪ್ಪು ಮತ್ತು ನಾಗದಾಳಿ ಸೊಪ್ಪನ್ನು ಸಮಪ್ರಮಾಣದಲ್ಲಿ ಅರೆದು ತೆಗೆದ ರಸವನ್ನು ದಿನದಲ್ಲಿ ಎರಡು ಬಾರಿ ಅರ್ಧ ಬಟ್ಟಲಿನಂತೆ ಕುಡಿಯಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಬಿಲ್ವಪತ್ರೆ, ಮಧುನಾಶಿನಿ, ತುಂಬೆ ಎಲೆ , ಬೇವಿನ ಕುಡಿ, ಕರಿಹಾಗಲ ಸೊಪ್ಪು - ಇವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೆರಳಿನಲ್ಲಿ ಒಣಗಿಸಿ ಚೂರ್ಣಮಾಡಿಡಬೇಕು. ಪ್ರತಿದಿನ ಒಂದು ಚಮಚೆ ಚೂರ್ಣವನ್ನು ಬಿಸಿ ನೀರಿನಲ್ಲಿ ಸೇರಿಸಿ ಕುಡಿಯಬೇಕು. ಇದನ್ನು ಮೂರು ತಿಂಗಳ ಕಾಲ ಮಾಡಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಎರಡು ಚಮಚೆಯ ಬಿಲ್ವಪತ್ರೆ ಎಲೆ, ಅರ್ಧ ಚಮಚೆ ಅರಿಶಿನಪುಡಿ, ಅಳಲೆ-ತಾರೆ-ಬೆಟ್ಟದನೆಲ್ಲಿ ಇವುಗಳ ಚೂರ್ಣ ತಲಾ ಅರ್ಧ ಚಮಚೆ ತೆಗೆದುಕೊಂಡು, ಎರಡು ಬಟ್ಟಲು ನೀರಿನಲ್ಲಿ ರಾತ್ರಿ ನೆನೆಸಿಡಬೇಕು.ಬೆಳಗ್ಗೆ ಈ ಕಷಾಯವನ್ನು ಶೋಧಿಸಿ ಎರಡು ಪಾಲು ಮಾಡಿ ಒಂದು ಪಾಲನ್ನು ಬೆಳಗ್ಗೆ , ಮತ್ತೊಂದನ್ನು ಸಂಜೆ ಕುಡಿಯಬೇಕು. ಇದನ್ನು ೨-೩ ತಿಂಗಳವರೆಗೆ ಮಾಡಬೇಕು. ಇದರಿಂದ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ. ಒಂದು ಹಿಡಿ ಬಿಲ್ವಪತ್ರೆ, ಒಂದು ಹಿಡಿ ಬೇವಿನ ಎಲೆ ಮತ್ತು ಅರ್ಧ ಹಿಡಿ ತುಳಸಿ ಎಲೆ ಇವನ್ನು ನೀರು ಸೇರಿಸದೆ ನುಣ್ಣಗೆ ಅರೆದು ಗುಳಿಗೆಗಳಾಗಿ ಮಾಡಿಡಬೇಕು. ಪ್ರತಿ ದಿನ ಬೆಳಗ್ಗೆ ಒಂದು ಗುಳಿಗೆಯನ್ನು ಸ್ವಲ್ಪ ನೀರಿನೊಡನೆ ಸೇವಿಸುತ್ತಿದ್ದರೆ ಮಧುಮೇಹ ಸಮಸ್ಯೆಯಿರುವವರಿಗೆ ಪ್ರಯೋಜನವಾಗುತ್ತದೆ.
ಮಕ್ಕಳ ಸಮಸ್ಯೆಗಳು : ಸಣ್ಣ ಮಕ್ಕಳಲ್ಲಿ ಹಲ್ಲು ಮೂಡುವ ಸಮಯದಲ್ಲಿ ಉಂಟಾಗುವ ಭೇದಿಗಳನ್ನು ತಡೆಗಟ್ಟಲು ಹೀಗೆ ಮಾಡಬೇಕು - ನಾಲ್ಕು ಚಮಚೆಯ ಬಿಲ್ವದ ಹಣ್ಣಿನ ತಿರುಳನ್ನು ಒಂದು ಲೋಟ ನೀರಿಗೆ ಬೆರೆಸಿ ನಿಧಾನವಾಗಿ ಕುದಿಸಬೇಕು. ಅದು ಕಾಲು ಲೋಟವಾದಾಗ ತಣಿಸಿ, ಶೋಧಿಸಿ ಒಂದು ಚಮಚೆ ಜೇನುತುಪ್ಪ ಸೇರಿಸಿ ಮೂರು ಪಾಲು ಮಾಡಿ ಒಂದು ದಿನದಲ್ಲಿ ಕುಡಿಸಬೇಕು. ಬಿಲ್ವಪತ್ರೆಯ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ನಂತರ ಹುರಿದು ಚೂರ್ಣ ಮಾಡಬೇಕು.ಅರ್ಧ ಚಮಚೆ ಜೇನುತುಪ್ಪದಲ್ಲಿ ಈ ಚೂರ್ಣವನ್ನು ನಾಲ್ಕು ಚಮಚೆ ಕಲೆಸಿ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು , ಗಂಟಲುನೋವು ನಿವಾರಣೆಯಾಗುತ್ತವೆ.
ಜ್ವರದ ಸಮಸ್ಯೆಗಳು : ಯಾವುದೇ ಬಗೆಯ ಜ್ವರವಿದ್ದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ. ಆಗಾಗ ಕಾಡುವ ಜ್ವರದಿಂದ ಬಳಲುತ್ತಿರುವವರು ಬಿಲ್ವದ ತೊಗಟೆಯ ಕಷಾಯವನ್ನು ದಿನದಲ್ಲಿ ಮೂರು ಬಾರಿ ನಾಲ್ಕು ಚಮಚೆಯಂತೆ ಒಂದು ವಾರದವರೆಗೆ ಸೇವಿಸಬೇಕು. ಮಲೇರಿಯಾ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಯವನ್ನು ಮಾಡಿ ಕುಡಿಯುತ್ತಿರಬೇಕು. ಮಧ್ಯಭಾರತದ ಬಸ್ತಾರ್ ನ ಆದಿವಾಸಿಗಳು ಜ್ವರದ ಸಮಸ್ಯೆ ಇದ್ದಾಗ ಬಿಲ್ವದ ಬೇರಿನ ತೊಗಟೆಯ ಕಷಾಯವನ್ನು ಮದ್ದಾಗಿ ಬಳಸುತ್ತಾರೆ. ಸಾಮಾನ್ಯ ಬಗೆಯ ಜ್ವರಗಳಲ್ಲಿ ಬಿಲ್ವದ ಬೇರಿನ ಕಷಾಯವನ್ನು ಕೊತ್ತಂಬರಿ ಪುಡಿಯೊಡನೆ ಸೇವಿಸುತ್ತಿದ್ದರೆ ಪ್ರಯೋಜನವಾಗುತ್ತದೆ.
ಶ್ವಾಸಕೋಶದ ತೊಂದರೆಗಳಿಗೆ ಎಲೆಗಳ ಕಷಾಯ ಒಳ್ಳೆಯದು. ಸಂಶೋಧನೆಯಲ್ಲಿ ಬಿಲ್ವ  : ಬಿಲ್ವದ ರಾಸಾಯನಿಕ ಸಂಯೋಜನೆ : ಮಾರ್ಮೆಲೋಸಿನ್, ಮಾರ್ಮೆಲೈಡ್, ಟ್ಯಾನಿಕ್ ಆಮ್ಲಗಳು, ಮಾರ್ಮಿನ್, ಅಂಬೆಲಿಫೆರೋಲ್, ಸ್ಕಿಮಿಯನೈನ್, ಐಸೋಪಿಂಪಿನೆಲಿನ್, ಮಾರ್ಮೆಲಿನ್, ಸ್ಕಿಮಿನ್, ಮಾರ್ಮೆಸಿನ್, ಮಾರ್ಮೆಸಿನಿನ್, ಕೊಬ್ಬಿನಾಮ್ಲಗಳು ಮತ್ತು ಚಂಚಲತೈಲ. ಬಿಲ್ವದ ಬೇರು ಮತ್ತು ಹಣ್ಣುಗಳಲ್ಲಿ ಕೌಮಾರಿನ್ ಗಳು - ಸ್ಕೊಪರೋನ್, ಸ್ಕೊಪೋಲೆಟಿನ್, ಅಂಬೆಲಿಫೆರೋನ್, ಮಾರ್ಮೆಸಿನ್ ನಂತಹ ರಾಸಾಯನಿಕಗಳಿವೆ. ಬಿಲ್ವದ ಹಣ್ಣಿನಲ್ಲಿ ಮೇಲಿನ ರಾಸಾಯನಿಕಗಳಲ್ಲದೆ ಝ್ಯುಂತೋಟೆಕ್ಸಾಲ್ ಮತ್ತು ಎಜಿಲೈನ್ - ಮಾರ್ಮೆಲೈನ್ - ಮಾರ್ಮೆಲೋಸೈನ್ ನಂತಹ ಆಲ್ಕ್ ಲಾಯ್ಡ್ ಗಳು, ಬೀಟಾಸೈಟೋಸ್ಟೆ ರಾಲ್ ಮತ್ತದರ ಗ್ಲೈಕೋಸೈಡ್, ಲಿನೋಲೆಯಿಕ್ ಆಮ್ಲ , ಗ್ಯಾಲಕ್ ಟೋಸ್, ಅರ್ಯಾಬಿನೋಸ್, ಯುರೋನಿಕ್ ಆಮ್ಲ ಇರುತ್ತದೆ. ಬಿಲ್ವದ ಬೇರಿನಲ್ಲಿ ಸೊರಾಲಿನ್, ಝ್ಯಾಂತೋಟಾಕ್ಸಿನ್, ಎಜೆಲಿನೋಲ್, ಮರ್ಮಿನ್, ಸ್ಕಿಮಿಯಾನೈನ್, ಸ್ಕೋಪೋಲೆಟಿನ್ ನಂತಹ ರಾಸಾಯನಿಕಗಳನ್ನು ಪತ್ತೆಹಚ್ಚಲಾಗಿದೆ.ಬಿಲ್ವದ ಎಲೆಯಲ್ಲಿ ಚಂಚಲ ತೈಲವಿದ್ದು (೦.೬%) ಇದರಲ್ಲಿ ಸ್ಕಿಮಿಯನೈನ್, ಎಜೆಲಿನೋಲ್, ಮಾರ್ಮೆಲೈಡ್, ಫ಼್ಲೋಬಟ್ಯಾನಿನ್, ಸ್ಟೆರಾಲ್, ಎಜೆಲಿನ್, ಆಲ್ಫಾ ಮತ್ತು ಬೀಟಾ ಫೆಲೆಂಡ್ರಿನ್, ಈಥೈಲ್ ಸಿನಮೈಡ್ಗಳು, ಮಾರ್ಮೆಸಿನಿನ್, ರೂಟಿನ್, ಬೀಟಾಸೈಟೋಸ್ಟೆ ರಿನ್ ಇರುತ್ತದೆ.ಬಿಲ್ವದ ಮರದ ತೊಗಟೆಯಲ್ಲಿ ಎಜೆಲಿನ್, ಅಂಬೆಲಿಫೆರೋನ್, ಮಾರ್ಮಿಸಿನ್, ಸ್ಟೆ ರಾಲ್ ಗಳು ಮತ್ತು ಟ್ರೈಟರ್ಪಿನೈಡ್ ಗಳು ಇವೆ.ಬಿಲ್ವದ ಹಣ್ಣಿನ ತಿರುಳಿನಲ್ಲಿ ೬೧.೫% ತೇವಾಂಶ, ೧.೮% ಪ್ರೋಟೀನ್, ೦.೩% ಕೊಬ್ಬು, ೧.೭% ಖನಿಜಗಳು, ೨.೯% ನಾರು, ೩೧.೮% ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣ ಇದೆ. ಕ್ಯಾರೋಟಿನ್, ಥಯಾಮಿನ್, ರೈಬೋವಿನ್, ನಿಯಾಸಿನ್ ಮತ್ತು 'ಸಿ' ಜೀವಸತ್ವ ಇದೆ.
ಬಿಲ್ವದ ಅಂತರಾಳದಲ್ಲಿರುವ ಬೇರೆ ಬೇರೆ ರಾಸಾಯನಿಕಗಳು ಈ ಕೆಳಕಂಡ ವೈದ್ಯಕೀಯ ಲಾಭವನ್ನು ನೀಡುವುದು ಹಲವಾರು ಸಂಶೋಧನೆಗಳಿಂದ ತಿಳಿದುಬಂದಿದೆ. ವೈರಸ್ಗಳನ್ನು ನಿಗ್ರಹಿಸುವುದು, ಹೃದಯದ ಕಾರ್ಯವನ್ನು ಉತ್ತೇಜಿಸುವುದು, ವಾಕರಿಕೆ ಆಗುವುದನ್ನು ತಪ್ಪಿಸುವುದು, ಬ್ಯಾಕ್ಟೀರಿಯಾಗಳನ್ನು ನಾಶಪಡಿಸುವುದು, ಭೇದಿಯಾಗದಂತೆ ನೆರವಾಗುವುದು, ಅಪಾಯಕಾರಿ ಶಿಲೀಂಧ್ರಗಳನ್ನ ನಿಗ್ರಹಿಸುವುದು ಇತ್ಯಾದಿ. ವೈಘ್ನಾನಿಕವಾಗಿ ನಡೆಸಿದ ಪ್ರಯೋಗಗಳಿಂದ ಬಿಲ್ವದ ಹಣ್ಣಿನ ತಿರುಳು ನಮ್ಮ ಅನ್ನನಾಳದಲ್ಲಿರುವ ಪರೋಪ ಜೀವಿಗಳನ್ನು ನಾಶಪಡಿಸುವುದು ತಿಳಿದುಬಂದಿದೆ. ಅತಿಸಾರ, ಅನಿಯಮಿತ ಭೇದಿ ಮತ್ತು ಹೊಟ್ಟೆ ನೋವನ್ನು ನಿವಾರಿಸುವುದು ಸಹ ತಿಳಿದುಬಂದಿದೆ. ಬಿಲ್ವಪತ್ರೆಯಲ್ಲಿರುವ ಎಜೆಲೈನ್ ಎಂಬ ಆಲ್ಕ್ ಲಾಯ್ಡ್ ಅಸ್ತಮಾ ಸಮಸ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸುವುದು ಗೊತ್ತಾಗಿದೆ.
ಗೃಹಣೀ ರೋಗದಲ್ಲಿ ಬಿಲ್ವ : ಗೃಹಣೇ ರೋಗವನ್ನು ನಿವಾರಿಸಲು ಬಿಲ್ವವನ್ನು ಕುಟಜ, ಜೀರಿಗೆ, ಬಬ್ಬುಲದೊಂದಿಗೆ ಬಳಸಿ ಪ್ರಯೋಗ ಮಾಡಿ ನೋಡಲಾಗಿದೆ. ಪ್ರಯೋಗದಿಂದ ಇವು ಗೃಹಣೇ ರೋಗವನ್ನು ಯಶಸ್ವಿಯಾಗಿ ನಿಯಂತ್ರಿಸುವುದು ತಿಳಿದು ಬಂದಿದೆ.

Comments

Popular posts from this blog

This blog explain about health tips which is very much useful for everyday healthy leaving.It describes how you can stay fit and fight with deceases. If you utilize these simple tips, you shall be the most healthy person in life time.